ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Tuesday, December 4, 2012

ನೀ ಬರುವುದಿಲ್ಲ...




ಚಿತ್ರ ಕೃಪೆ:ಅಂತರ್ಜಾಲ



ನನ್ನ ಸರಿದ ಕಾಲದಂಚುಗಳ
ನೆರಿಗೆ ಕಟ್ಟಲಾರೆ ನೀನು!
ನನ್ನ ತೋಳತೊರೆದು ಹೋದ
ನಗುವ  ನಗಿಸಲಾರೆ ನೀನು!

ಸೆರಗಿನಂಚಿನಲ್ಲಿ ಜೋಡಿಸಿಟ್ಟ
ಮುತ್ತು ಮಣಿಗಳ ಹಾಗೆ
ಜೋಪಾನ ಮಾಡಿದೆ ನಿನ್ನ
ನೀ ನನ್ನೆದೆಯನ್ನೆ
ಮುಚ್ಚಿಟ್ಟುಕೊಳ್ಳದಾದೆ!

ನನ್ನ ಕಣ್ಣೆವೆಗಳಲ್ಲಿ
ಕಾಂತಿಯಾಗಿಸಿಕೊಂಡೆ
ಗೆಳೆಯಾ ನೀ ಬೆಳಕಿಲ್ಲದ
ನೆರಳಲ್ಲಿ ನನ್ನ ಬಿಟ್ಟು ಹೋದೆ!

ಕಾಲದಲ್ಲಿ
ಅರಳಿದ ಹೂಗಳೆಲ್ಲ
ನಿನ್ನ ಆಗಮನಕ್ಕೆ ಕಾಯುವುದಿಲ್ಲ!
ನಾಳೆಗಳ ನಿರೀಕ್ಷೆ
ಬಾಡಿ ಉದುರುವುದನ್ನು
ತಡೆಯುವುದಿಲ್ಲ!

ಮತ್ತೆ ನಾಳೆಗಳು ನಮ್ಮವಲ್ಲ!
ನೆನಪ ನಾವೆಗೆ ಕಟ್ಟಿ ಹೋದ
ಹಗಲುಗನಸುಗಳು!
ನಮ್ಮವಾಗುವುದಿಲ್ಲ!
ಅದಕ್ಕೆಂದೇ ಕನಸು ಕಾಣುವುದಿಲ್ಲ!
ನೀ ಬರುವುದೂ ಇಲ್ಲ.!!

5 comments:

  1. ಆವ ಬರದೇ ಇರಬಹುದು ಆದರೆ ನಾಳೆಗಳು ನಮ್ಮವಲ್ಲವೇ ? :)
    ಚೆನ್ನಾಗಿದೆ

    ReplyDelete
  2. ನಿಜ. ಅವನಿಲ್ಲದ ನಾಳೆಗಳು ನನ್ನವು!! ಇವತ್ತಿಲ್ಲದವನು ನಾಳೆ ಬರುತ್ತಾನೆಂಬ ಕನಸುಗಳಿಗಿಂತ ಇರುವ ನನ್ನ ನಾಳೆಗಳ ನಮ್ಮದಾಗಿಸಿಕೊಳ್ಳುವ ಹಂಬಲದೊಂದಿಗೆ ಕವಿತೆಯ ಆಶಯವಿದೆ. ಧನ್ಯವಾದಗಳು ಸ್ವರ್ಣ ಅವರೆ...

    ReplyDelete
  3. ಸಿರಿ ಅಕ್ಕ.. ಕವನಕ್ಕೆ ಮೊದಲಿಗೊಂದು ಸೂಪರ್ ಲೈಕ್.. :) :)

    ಕವನದೊಳಗಿನ ಭಾವ.. ಅದರೊಳಗಿನ ಜೀವ.. ಬಹಳ ಇಷ್ಟ ಆಯ್ತು..

    ನೀವು ಆ ಭಾವಗಳನ್ನ ಪದಕ್ಕಿಳಿಸಿ ನಿರೂಪಿಸಿರೋ ರೀತಿ ಅತಿ ಸುಂದರ..

    ಬಹಳ ಇಷ್ಟ ಆಯ್ತು.. :) :)

    ReplyDelete
  4. ತುಂಬಾ ತುಂಬಾ ಧನ್ಯವಾದಗಳು ಪದ್ಮಾ ಮತ್ತು ಸತೀಶ್ ಅವರಿಗೆ.

    ReplyDelete