ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Wednesday, October 8, 2014

ಸತ್ಯದಾವರಣ!

ಅಳಲೊಂದು ಹೆಗಲು
ನಗಲೊಂದು ನೆಪವು
ನೀನಿರದ ಘಳಿಗೆ
ನಾನಿರದ ಜೀವ!

ನನ್ನೊಳಗೆ ಹುಟ್ಟು
ನನ್ನೊಳಗೆ ಮರಣ
ಸುಖವಲ್ಲವೇ ಗೆಳೆಯ
ಸತ್ಯದಾವರಣ!

ಚಿತ್ತವಿದು ಸಂಕಲ್ಪ
ಮುಕ್ತಿತತ್ವದ ಒಲವು
ಬತ್ತಿರುವ ಭಾವಗಳ
ಬೆಳಕ ಚಿಲುಮೆ

ರಕ್ತ ಮಾಂಸದ ಜೀವ
ಕುದಿ ಕಳೆವ ಭಾವ
ತಣ್ಣಗಾಗಿಸು ಎಲ್ಲ
ನಿರ್ಜೀವ ತತ್ವ.