ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Wednesday, January 5, 2011

ಸಾವಿನ ಮನೆ.

ಸಾವಿನ ಮನೆಯಲ್ಲಿ ನಿಂತು
ಸಾಂತ್ವನಗಳ ಯಾರಿಗೆ ಹೇಳಲಿ?
ಸತ್ತಂತೆ ಬದುಕುವ ಜೀವಗಳಿಗಾ!
ಸತ್ತು ಬದುಕುವ ಆತ್ಮಗಳಿಗಾ!

ವಿಶ್ವಾತ್ಮನವನಲ್ಲಿ ಕಾರಣವ ಕೇಳಲಾರೆ.
ಚಿರಂತನಕೆ ಚಿತೆ ಸುಡದು.
ಮತ್ತಿಲ್ಲಿ ಮೌನ, ಗದ್ಗದ,
ಕಣ್ಣಂಚ ವಿಷಾದ, ವಿವರಣೆಗಳು
ಈ ಕ್ಷಣಕೆ ಮೂಕವಿಲ್ಲಿ.!

ಬೋಳುಮರದ ಮಸ್ತಕದಿ
ಮತ್ತೆ ಮೂಡದ ಚಿತ್ರಗಳು.
ಕತ್ತಿನ ತುಂಬಾ ತುಂಬಿದ ಕರಿನೆರಳು!
ಅತ್ತಿತ್ತ ಸರಿಯದ ಕಣ್ರೆಪ್ಪೆಗಳು
ತುಂಬಿ ನಿಂತ ಜೀವ ಕೊಳಗಳು.

ಓ ಸಾವೇ ಎಲ್ಲಿದ್ದಿ ನಿ?
ಹೇಗಿದ್ದಿ?ನಂಗೂಂದಿಷ್ಟಾದರೂ
ಬಿಟ್ಟುಗೊಡು ನಿನ್ನ ಗುಟ್ಟು.
ಮತ್ತೆಂದಾದರೂ ಬರಲೇ ಬೇಕಲ್ಲ ನಾನೂ ಸುಟ್ಟು!
ಸಾವಿನ ಮನೆಗೆ ಸಾಂತ್ವನದ ನೆಲೆಗಟ್ಟು
ಸತ್ಯ ನಿತ್ಯವೆಂಬ ಈ ನುಡಿಗಟ್ಟು!

No comments:

Post a Comment