ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Tuesday, December 7, 2010

ಅವಳು......

 

ಕಂಗಳಲಿ ಬತ್ತಿದೆಣ್ಣೆಯ ಹೊತ್ತು
ಕೈಗಳಲಿ ಬೆಳಗೋ ಹಣತೆಯ ಹಿಡಿದು
ನಸುನಗುವ ಮುಸುಕಿನದಿ ಮತ್ತೆ ಬಂದಿದೆ
ದೀಪಾವಳಿ! ದೀಪಗಳ ಹಬ್ಬ ದೀಪಾವಳಿ.

ಕತ್ತಲೆಯ ಹಿಂದೆ ಬೆಳಕಿನಲೆ ಬರಲೆಂದು
ಪುಟ್ಟ ಹಣತೆಯ ಹಿಡಿದು ಉರಿಸುತ್ತ ನಿಂದವಳು
ಕತ್ತಲೆಯ ಕೊಂದವಳು
ಚಿತ್ತದಲಿ ಬೆಂದವಳು....

ಜೀವನದಿ ಜೀವನ್ಮುಖಿ ಜೀವಸೆಲೆ ಸಮ್ಮಿಲನ
ಕತ್ತಲೆಯ ಕಡಲಿಂದ ಬೆಳಕಿನ ಆಭರಣ
ಮುತ್ತು ರತ್ನದ ತೇರ ಎಳೆದೆಳೆದು ನಿಂತವಳು
ಮತ್ತೆ ನಸುನಗುವ ಮುತ್ತೈದೆ ಹಣೆಯವಳು!

ಅವಳೊಡಲು ಬೆಂಕಿ... ಉರಿವ ಚಿತೆಯನ್ನ
ಕಂಬನಿಯ ಕೊಡ ಹಿಡಿದು ನಂದಿಸಿದ ಬೆಳಕಲ್ಲೇ
ಮತ್ತೆ ಬೆಳಕಿನ ಹಣತೆ ಹಚ್ಚಿದವಳು..
ನಿತ್ಯ ನಿಯತಿಗೆ ತನ್ನ ತನುಮನವ ಉರಿಸಿ ನಿಂತವಳು......

ಕತ್ತಲೆಯೇ ಬೆದರಿದೆ ಆ ಅಗ್ನಿಶಿಖೆಗೆ!
ಮತ್ತೆಲ್ಲಿ ಉಳಿದಿದೆ ಹೂನಗೆಯ ಒಳಬಗೆ!
ಹುಟ್ಟಿ ಬರುವುದೇ ಹಣತೆ ಹಿಡಿದವಳ ಕಿರುನಗೆ
ಅಳಿಯುವುದೇ ಅವಳ ಸುತ್ತಲಿನ ಕರಿನಗೆ!

No comments:

Post a Comment